ಅಕ್ಷರ ಪರಿವಾರ
Monday, 14 July 2025
ದಾರಿ ಹುಡುಕುವ ಮನಸ್ಸು
ಬೆಳಗ್ಗೆ ಎದ್ದಾಗ, ಹೊಸ ದಿನದ ಆಸೆ ಇರುತ್ತದೆ. ಮನಸ್ಸು ಚುರುಕಾಗಿ, ಇವತ್ತಾದರೂ ಎಲ್ಲವೂ ಚೆನ್ನಾಗಿ ಆಗಬೇಕು ಅನ್ನೋ ಆಸೆ. ಆದರೆ, ಹಿಂದಿನ ದಿನದ ತೊಂದರೆಗಳು, unresolved ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ನಗಬೇಕು ಅಂದರೂ, ಒಳಗಿನ ದುಃಖ ಎಲ್ಲೋ ಬಂದು ನಮ್ಮನ್ನು ಆವರಿಸುತ್ತದೆ. ಪ್ರೀತಿಯಿಂದ ಮಾತನಾಡಬೇಕು ಅಂದರೂ, ಮಾತುಗಳು ಸಿಗದೆ ಸುಮ್ಮನಿರುವುದೇ ಒಳ್ಳೆಯದು ಅನಿಸುತ್ತದೆ. ಇದು ನನಗೆ ಮಾತ್ರ ಹೀಗಾಗುತ್ತಿದೆಯೇ? ಅಥವಾ ಎಲ್ಲರಿಗೂ ಹೀಗೇ ಅನಿಸುತ್ತದೆಯೇ?
ಕಷ್ಟಪಟ್ಟು ಏನಾದರೂ ಮಾಡಬೇಕು, ಹೊಸ ದಾರಿ ಕಂಡುಹಿಡಿಯಬೇಕು ಅಂತ ಹೊರಟರೆ, ಸ್ವಲ್ಪ ಸೋಮಾರಿತನ ಬಂದು, ನಾವು ಮಾಡಿದ ಎಲ್ಲಾ ನಿರ್ಧಾರಗಳನ್ನೂ ಮರೆಸಿಬಿಡುತ್ತದೆ. ಒಳ್ಳೆಯ ದಾರಿಯಲ್ಲಿ ಹೋಗಬೇಕು ಅನ್ನೋ ಆಸೆ ತುಂಬಿದ್ದರೂ, ಗೊತ್ತಿಲ್ಲದ ಒಂದು ಶಕ್ತಿ ಕೆಟ್ಟ ದಾರಿಗಳ ಕಡೆಗೆ ನಮ್ಮನ್ನು ಎಳೆಯುತ್ತದೆ. ನಿಜವಾದ ನೆಮ್ಮದಿ ಅಂದರೆ ಏನು? ಅದನ್ನು ಎಲ್ಲಿ ಹುಡುಕಬೇಕು? ಈ ಗೊಂದಲಗಳ ಮಧ್ಯೆ, ದಾರಿ ಸಿಗದ ಪ್ರಯಾಣಿಕನಂತೆ ಮನಸ್ಸು ಅಲೆದಾಡುತ್ತಿದೆ.
ಪ್ರತಿ ಹೆಜ್ಜೆಯಲ್ಲೂ ಒಂದು ಹೊಸ ಪಾಠ, ಒಂದು ಹೊಸ ಸತ್ಯ ಅಡಗಿದೆ. ಈ ಒಳಗಿನ ಹೋರಾಟಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆಯೇ? ಅಥವಾ ಕೊನೆಯಾಗುವ ಬದುಕಿಗೆ ಇವೆಲ್ಲವೂ ಅನಗತ್ಯ ಭಾರವೇ? ಈ ಪ್ರಶ್ನೆಗಳು ಬಂದಾಗ, ಕಣ್ಣ ಮುಂದೆ ಇರುವ ಸಣ್ಣ ವಿಷಯಗಳಲ್ಲೂ ದೊಡ್ಡ ಅರ್ಥ ಇರುವುದನ್ನು ನೋಡುತ್ತೇವೆ. ಒಂದು ಹೂ ಅರಳಿದಾಗ, ಒಂದು ಮಗು ನಕ್ಕಾಗ, ಒಂದು ಮಳೆ ಹನಿ ಬಿದ್ದಾಗ, ಬದುಕಿನ ನಿಜವಾದ ಅಂದ ಗೊತ್ತಾಗುತ್ತದೆ. ಬಹುಶಃ, ಈ ಗೊಂದಲದ ಭಾವನೆಗಳ ಮಧ್ಯೆಯೇ, ನಾವು ನಮ್ಮ ನಿಜವಾದ ದಾರಿಯನ್ನು ಕಂಡುಹಿಡಿಯಬೇಕು. ಅದು ಹೊರಗಲ್ಲ, ನಮ್ಮೊಳಗೇ ಇದೆ, ದಾರಿ ಹುಡುಕುವ ನಮ್ಮ ಮನಸ್ಸಿನಲ್ಲಿ.
Tuesday, 1 May 2012
ಜ್ಞಾನ.....
ನಗುನಗುತ್ತ ಏಳಬೇಕಾಗಿದೆ
ಆದರೆ ಸಮಸ್ಯೆ ಮಾತ್ರ ನೆನಪಾಗುತ್ತಿದೆ
ಪ್ರೀತಿಯಿಂದ ಮಾತನಾದಬೇಕಾಗಿದೆ
ಆದರೆ ವಿಷಯದ ಕೊರತೆ ಕಾಡುತ್ತಿದೆ
ಸತತವಾಗಿ ಪರಿಶ್ರಮ ಮಾಡಬೇಕಾಗಿದೆ
ಆದರೆ ಸೋಮಾರಿತನದಲ್ಲಿ ಪ್ರತಿದಿನ ಕಳೆದು ಹೋಗುತ್ತಿದೆ
ಹೊಸ ದಾರಿಯಲ್ಲಿ ಸಾಗಬೇಕಾಗಿದೆ
ಆದರೆ ಹಳೆ ದಾರಿದೀಪವನ್ನು ಆರಿಸಲಾಗಿದೆ
ಸಂಬಂಧಗಳನ್ನು ಉಳಿಸಬೇಕಾಗಿದೆ
ಆದರೆ ವಿಶ್ವಾಸ ಆತ್ಮೀಯತೆ ಕಡಿದು ಹೋಗುತ್ತಿದೆ
ಸನ್ಮಾರ್ಗ ಹುಡುಕಬೇಕಾಗಿದೆ
ಆದರೆ ದುರ್ಮಾರ್ಗ ನಿರಂತರ ಕರೆಯುತ್ತಿದೆ
ಜೀವನದಲ್ಲಿ ಜಿಗುಪ್ಸೆ ಬಂದಂತಾಗಿದೆ
ಆದರೂ ಉಲ್ಲಾಸದಿಂದ ದಿನವಿಡಿ ಕಳೆಯಬೇಕಾಗಿದೆ
ಎಂತಹ ಪಾಡು! ಇದು ಮನುಷ್ಯನಿಗೆ ಬೇಕಾ?
Wednesday, 11 April 2012
ಮಾತು,ಮಾತು,ಯಾವತ್ತು ಮಾತು
ನಾನು ಪಾಠ ಕೇಳುತ್ತಿದ್ದೆ ಭಕ್ತಿಂದ
ಕರೆ ಬಂತು, ತಕ್ಷಣ ಬಾ ಎಂದು
ಓಡಿ ಹೋಗಿ ನಿಂತೆ ಭಯದಿಂದ
ಹೇಳಿದರು ಸ್ಪರ್ಧೆಗೆ ತಯಾರಾಗಲೆಂದು
ಆಲೋಚನೆ ಮಾಡ ತೊಡಗಿದೆ
ಏನು ಮಾತನಾಡಬೇಕೆಂದು
ವಿಷಯ ಸಂಗ್ರಹಿಸಲು ಬಯಸಿದೆ
ನನ್ನ ಜ್ಞಾನವನ್ನು ವೃದ್ಧಿಸಲು
ಅಲ್ಪ-ಸ್ವಲ್ಪ ತಿಳಿದುಕೊಂಡು ಹೊರಟೆನು
ಸ್ಪರ್ದೆಯಲ್ಲಿ ಭಾಗವಹಿಸಲೆಂದು
ವೇದಿಕೆಗೆ ಹತ್ತಿ ನಿಂತೆನು
ವಿಷಯ ಮಾತನಾಡಲೆಂದು
ಮಾತು ಮುಗಿಸಿ ಕುಳಿತೆ
ಸ್ಪರ್ಧರ್ಥಿಗಳ ವಿಷಯ ಕೇಳಲೆಂದು
ಎಲ್ಲರು ಮಂಡಿಸಿದರೂ ನನ್ನಂತೆ
'ನಮ್ಮ ಭವಿಷ್ಯ' ಹೀಗಿರುವುದೆಂದು
ಮೂರು ಘಂಟೆ ಕೇಳಿ ಸುಸ್ತಾಯಿತು
ಎದ್ದು ಹೋಗಲು ಅವಿನಯವೆಂದು
ಆಗ ನನಗೆ ಅರಿವಾಯಿತು
ಬರಿ ಮಾತು ಬೇರೆಯವರಿಗೆ ಹೀಗಾಗುತಿತ್ತು ಎಂದು
ಹಾಗಾಗಿಯೇ ಭೋದಿಸಿದರು ನಮ್ಮ ಹಿರಿಯರು
ಮಾತು ಬೆಳ್ಳಿ,ಮೌನ ಚಿನ್ನವೆಂದು
ಆದರೇ ನನಗೆ ಬೇಕಾಯಿತು ತಿಳಿಯಲು
ಮಾತಿನ ಸುರಿಮಳೆ ಇಂದು
ಸದಾ ನೆನಪಿರಲಿ.....
ಮಾತು ಬೆಳ್ಳಿ ಆದರೇ ಮೌನ ಬಂಗಾರ....
Thursday, 8 March 2012
ಪ್ರೀತಿಯ ದಾರಿ....
ಜೀವನದ ಹಾದಿಯನ್ನು ಮೊದಲೇ ನಿಗದಿ ಪಡಿಸೋದು ಬಹಳ ಕಠಿಣ. ಜೀವನದಲ್ಲಿ ಮುಂದೆ ಸಾಗುತ್ತಾ ಸಾಗುತ್ತಾ ನಾವು ಯಾರನ್ನು ಭೇಟಿ ಆಗುತ್ತೇವೆ ಅನ್ನುವುದು ನಮಗೆ ಅರಿಯದ ವಿಷಯ. ಎಲ್ಲಿಯೋ ಸಿಕ್ಕಿದ ಒಬ್ಬ ವ್ಯಕ್ತಿ ನಮಗೆ ಯಾವೊದೋ ಜನ್ಮದ ಗೆಳೆಯ ಅನ್ನುವ ಭಾವನೆ ಹುಟ್ಟಿಸುವಂತೆ ಆಗುತ್ತದೆ.
ಅಂತಹ ಒಂದು ಪವಿತ್ರ ಭಾಂದವ್ಯ ಈಗ ಕೂಡ ಇದೆ ಅನ್ನುವುದು ಒಂದು ವಿಶೇಷ ಹಾಗೂ ಕುತುಹಳಕಾರಿ ವಿಷಯ. ಪ್ರೇಮಿಗಳ ನಡುವೆ ಮೊದಲನೋಟದಲ್ಲೇ ಹುಟ್ಟುವ ಪ್ರೇಮವನ್ನು ಕೇಳಿದ್ದೇವೆ ಆದರೇ ತಂದೆ ಮಗಳ ನುದುವಲ್ಲಿ ಮೊದಲ ನೋಟದಲ್ಲಿ ಪ್ರೇಮ? ಅಲ್ಲ ತಾಯಿ ಮಗನ ನಡುವಲ್ಲಿ ಅಥವಾ ಸಹೋದರ ಸಹೋದರಿಯರ ನಡುವಲ್ಲಿ ಮೊದಲನೋತೋದಲ್ಲಿ ಪ್ರೇಮ? ಸಾದ್ಯವೇ ಇಲ್ಲ ಅಂತ ಅಂದುಕೊಳ್ಳುವುದು ತಪ್ಪಾಗಬಹುದು. ಪ್ರೀತಿ, ಪ್ರೇಮ ಅನ್ನುವುದು ಎಲ್ಲ ಸಂಬಂಧಗಳ್ಳಲ್ಲು ಇರುವಂತಹ ಒಂದು ಮೂಲಭೂತ ವಿಷಯ. ಹಾಗಾದರೆ ನಮ್ಮ ಮನೆಯಲ್ಲಿ ಸಿಗುವ ಪ್ರೀತಿ, ಪ್ರೀತಿ ಅಲ್ಲವೇ?
ಪ್ರೀತಿ ಹೌದು ಎಂದಾದರೆ, ನಮ್ಮ ತಂದೆ, ತಾಯಿ, ಸಹೋದರ ಸಹೋದರಿಯರೂ ನಮ್ಮ ಜೀವನದ ಅತ್ಯಂತ ಆತ್ಮೀಯ ಗೆಳೆಯರೂ ಹಾಗು ಪ್ರೇಮಿಗಳು ಆಗಲೇ ಬೇಕು. ನಮ್ಮ ಜೀವನದ ಜ್ಯೋತಿಯನ್ನು ಸಂರಕ್ಷಿಸಿ ಬೆಳೆಸುವವರು. ಆದರೇ, ಛಿ....ಎದೆಂಥಹ ಮಾತು ಅನ್ನುವ ಭಾವನೆ ನಿಮ್ಮದಾದರೆ , ಒಮ್ಮೆ ನಿಮ್ಮ ತಂದೆ ಅಥವಾ ತಾಯಿಯ ಹತ್ತಿರ ಕೇಳಿ ನೋಡಿ, ನಿಮ್ಮನ್ನು ಮೊದಲು ಕಂಡು ಕೈಯಲ್ಲಿ ಎತ್ತಿಕೊಳ್ಳುವಾಗ ಅವರಿಗೆ ಏನು ಅನ್ನಿಸಿತ್ತು? ಅವರ ಉತ್ತರ ಯಾವಾಗಲೂ "ಲವ್ ಅಟ್ ಫಸ್ಟ್ ಸೈಟ್ " ಅಥವಾ ಮೊದಲನೋಟದಲ್ಲಿ ಪ್ರೇಮ. ಮಗುವಿಗೆ ತನ್ನ ತಂದೆಯೇ ಲೋಕದ ನಾಯಕ, ತನ್ನ ತಾಯಿಯೇ ವಿಶ್ವದಸುಂದರಿ. ಇದ್ದನೇ ನಾವು ಪ್ರೇಮಿಗಳ್ಳಲ್ಲಿ ಹುಡುಕುವುದು?
ಹುಡುಕಾಟವನ್ನು ಬಿಟ್ಟು ಕಣ್ತೆರೆದು ನೋಡಿ.....ಸಾಕ್ಷಾತ್ ದೇವರಂತಿರುವ ನಮ್ಮ ಪರಿವಾರ ಸದಾ ನಮ್ಮೊಂದಿಗೆ ಇರುತ್ತದೆ. ಹೊರಪ್ರಪಂಚದಲ್ಲಿ ನಮ್ಮ ಡ್ರೀಮ್ ಬಾಯ್ ಅಥವಾ ಡ್ರೀಮ್ ಗರ್ಲ್ ಮಾತ್ರವಲ್ಲ ತಂದೆ ತಾಯಿಯಂದ್ರು ಎಲ್ಲೆಲ್ಲೂ ಕಾಯುತ್ತ ಇರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿ......ಹಿಂದಿನ ಜನುಮದಲ್ಲಿ ನಿಮ್ಮ ಹೆತ್ತವರು ಕಾಣಿಸಿಕೊಳ್ಳಬಹುದು.
ಇಂಥಹ ಅನುಭವ ನಿಮಗಾದರೆ, ಖಂಡಿತ ಒಪ್ಪಿಕೊಳ್ಳುತೀರಿ ಈ ವಿಭಿನ್ನವಾದ ಪ್ರೇಮ ಕಥೆಯನ್ನು......
Subscribe to:
Posts (Atom)


